ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ, ಸಹಾಯಕ ಪ್ರಾಧ್ಯಾಪಕರಾದ ಡಾ. ಮಾರಿಯಾ ಎ. ಅವರ ಮಾರ್ಗದರ್ಶನದಲ್ಲಿ “ಅಸ್ತಿತ್ವ – ಅಂತರಕಾಲೇಜು ಉತ್ಸವ”ವನ್ನು ಆಯೋಜಿಸಲಾಯಿತು.
ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲು ಆಯೋಜಿಸಲಾದ ಈ ಉತ್ಸವದಲ್ಲಿ 35 ಕಾಲೇಜುಗಳು ಭಾಗವಹಿಸಿ, ಅಸ್ತಿತ್ವದ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ನಗರ ಪೊಲೀಸ್ ಇಲಾಖೆಯ ಸೆಂಟ್ರಲ್ ಕ್ರೈಂ ಬ್ರಾಂಚ್ (CCB), ನಾರ್ಕೋಟಿಕ್ಸ್ ವಿಭಾಗದ ACP ಎಲ್. ವೈ. ರಾಜೇಶ್ ಅವರು ಭಾಗವಹಿಸಿದ್ದರು.
ಗೌರವಾನ್ವಿತ ಅತಿಥಿಯಾಗಿ ಜಾಗೃತಿ ಟ್ರಸ್ಟ್ನ ಶ್ರೀ ಬಿ. ನಾಗೇಶ್ ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಅರಿವನ್ನು ಉತ್ತೇಜಿಸುವಲ್ಲಿ “ಅಸ್ತಿತ್ವ” ಅಂತರಕಾಲೇಜು ಉತ್ಸವವು ಮಹತ್ವದ ವೇದಿಕೆಯಾಗಿ ಮೂಡಿಬಂದಿತು.





