ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಇಂದು ನೂತನ ಬಿ-ಬ್ಲಾಕ್ನ್ನು ಉದ್ಘಾಟಿಸಲಾಯಿತು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಈ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.ಕರ್ನಾಟಕದ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಬೆಂಗಳೂರಿನ ಆರ್ಚ್ಬಿಷಪ್ ಹಿಸ್ ಗ್ರೇಸ್ ಮೋಸ್ಟ್ ರೆವರೆಂಡ್ ಡಾ. ಪೀಟರ್ ಮಚಾಡೋ ಕರ್ನಾಟಕ ಜೆಸ್ಯೂಟ್ ಪ್ರಾಂತ್ಯದ ಪ್ರಾಂತೀಯರಾದ ರೆವ. ಫಾ. ಡಯೋನಿಸಿಯಸ್ ವಾಜ್ SJ,ಸಂತ ಜೋಸೆಫ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ರೆವ. ಡಾ. ವಿಕ್ಟರ್ ಲೋಬೋ SJ,ರೆವ. ಡಾ. ಮೆಲ್ವಿನ್ ಪಿಂಟೋ SJ, ಪ್ರೊ-ಚಾನ್ಸಲರ್,ಮೌಂಟ್ ಸೇಂಟ್ ಜೋಸೆಫ್ನ ರೆಕ್ಟರ್ ರೆವ. ಡಾ. ಜೋಸೆಫ್ ಆಂಟನಿ ಡಿ’ಮೆಲ್ಲೋ SJ,ಡಾ. ವಿ. ಕ್ರಿಸ್ಟೋ ಸೆಲ್ವನ್, ಬಿ-ಬ್ಲಾಕ್ ಉದ್ಘಾಟನಾ ಸಮಿತಿಯ ಸಂಚಾಲಕರು.ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಉದ್ಘಾಟನಾ ಕಾರ್ಯಕ್ರಮವು ಸಂತ ಜೋಸೆಫ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿಯ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಗಮನ ಸೆಳೆಯಿತು.





