ಬೆಂಗಳೂರು:

ನಾಡಿನ ಮನೆಮಾತಾಗಿರುವ, ಐದು ಸಾವಿರಕ್ಕೂ ಅಧಿಕ ಸಂಚಿಕೆಗಳ ಪ್ರಸಾರ ಕಂಡು ಗಿನ್ನೆಸ್ ಸೇರಿ ಹಲವು ದಾಖಲೆಗಳನ್ನು ನಿರ್ಮಿಸಿರುವ ದೂರದರ್ಶನ ಚಂದನವಾಹಿನಿಯ “ಥಟ್ ಅಂತ ಹೇಳಿ” ರಸ ಪ್ರಶ್ನೆ ಕಾರ್ಯಕ್ರಮದ ಐದು ಸಂಚಿಕೆಗಳು ಮಾರ್ಚ್ 4 ರ ಬುಧವಾರ ಬೆಳಿಗ್ಗೆಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ಚಿತ್ರೀಕರಣ ನಡೆಯಿತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡಾ. ನಾ. ಸೋಮೇಶ್ವರ್ ಅವರು ಪ್ರೆಸ್ ಕ್ಲಬ್ ನಲ್ಲಿ ವಿಶೇಷ ಸಂಚಿಕೆಗಳ ನಿರೂಪಣೆ ಮಾಡಿದರು. ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂ.ನ. ಜಿಲ್ಲಾಧ್ಯಕ್ಷರಾದ ಸೋಮಶೇಖರ ಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ್ರು, ಎಎನ್ಐ ಸುದ್ದಿಸಂಸ್ಥೆ ಕರ್ನಾಟಕ ಮುಖ್ಯರಾದ ಮಧು, ರಾಷ್ಟ್ರೀಯ ವಾಹಿನಿಯ ರಾಘವ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here