ಚಿತ್ರದುರ್ಗ: ಕಾಂತರಾಜ್ ವರದಿಯನ್ನು ಸಚಿವ ಸಂಪುಟದಲ್ಲಿ ತರಲಿರುವ ಮುಖ್ಯಮಂತ್ರಿಯವರ ಈ ನಿರ್ದಾರವನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಕನಕಗುರು ಪೀಠದ ಹೊಸದುರ್ಗ ಶಾಖಾಮಠದ ಜಗದ್ಗುರು ಶ್ರೀ ಈಶ್ವರಾನಂದಪುರಿ ಮಹಾಗುರುಗಳು ಹೇಳಿದ್ದಾರೆ.
ವಿರೋಧ ಪಕ್ಷದವರು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ ಆದರೆ
ಲಿಂಗಾಯತ ಸಮುದಾಯ ಮತ್ತು ಒಕ್ಕಲಿಗ ಸಮುದಾಯ ಈ ವರದಿಯನ್ನು ವಿರೋಧಿಸುತ್ತಿವೆ ಎಂದು ಹೇಳಲಾಗುತ್ತಿದೆ. ವರದಿ ಬಂದ ಮೇಲೆ ತಮ್ಮ ಆಕ್ಷೇಪಗಳನ್ನು ಮತ್ತು ಅದರಲ್ಲಿನ ಲೋಪದೋಷಗಳನ್ನು ಸರ್ಕಾರದ ಗಮನಕ್ಕೆ ತರಲು ಅವಕಾಶ ಇದೆ.
ಈ ರಾಜ್ಯದ ಅನೇಕ ಹಿಂದುಳಿದ ಸಮುದಾಯಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳು ಸ್ವಾತಂತ್ರ್ಯ ಬಂದು ಇಂದಿನವರೆಗೂ ಗೊತ್ತಿಲ್ಲ ಈ ವರದಿಯ ಮೂಲಕ ಕುರುಬ ಈಡಿಗ ಗೊಲ್ಲ ಮಡಿವಾಳ ಬೆಸ್ತ ಉಪ್ಪಾರ ವಿಶ್ವಕರ್ಮ ಸವಿತಾ ತಿಗಳ ದೇವಾಂಗ ಲಮಾಣಿ ಬೋವಿ ಕುಂಚಿಟಿಗ ಮಾದಾರ ಛಲವಾದಿ ಹಡಪದ ಗಾಣಿಗ ಕುಂಬಾರ ಹೆಳವ ಕೊರಮ ಕೊರಚ ಇನ್ನೂ ಅಲಕ್ಷಿತ ಸಮುದಾಯಗಳು ಚಾತಕ ಪಕ್ಷಿಯಂತೆ ಕಾಯುತ್ತಿವೆ ಎಂದಿದ್ದಾರೆ.
ಹೊಟ್ಟೆ ತುಂಬಿದವರು ವಿರೋದಿಸುತ್ತಾರೆ
ಹಸಿದವರು ವರದಿಗಾಗಿ ಕಾಯುತ್ತಿರುತ್ತಾರೆ
ವರದಿ ಬಿಡುಗಡೆಯಾಗಿ ಈ ಸಮುದಾಯಗಳಿಗೆ ಬೆಳಕಾಗಲಿ ಎಂದು ಆಶಿಸುತ್ತೇನೆ
ಈಶ್ವರಾನಂದಪುರಿ ಸ್ವಾಮೀಜಿ
ಕನಕಗುರುಪೀಠ ಶಾಖಾಮಠ ಕನಕಧಾಮ ಹೊಸದುರ್ಗ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.